ಕೆಲವರ ಗೇಳೆತನ ಹಾಗೂ ಬಾಂಧವ್ಯ ಸಣ್ಣ ಕಾರಣಾಂತರಗಳಿಂದ ಶುರು ಆಗಿ ಎಲ್ಲಿಗೂ ಕರೆದೊಯ್ಯುತ್ತದೆ ಅಲ್ಲದೆ ಅವರ ನಡುವಿನ ಮಮತೆ ಬಾಂಧವ್ಯ ಹಲವಾರು ಸ್ಪೂರ್ತಿಯಾಗಿರುತ್ತದೆ ಹಾಗೂ ಎಲ್ಲರನ್ನು ಮೋಡಿಮಾಡುತ್ತದೆ. ಅದರಲ್ಲೂ ಜನ ಮೆಚ್ಚಿದ್ದ ನಟರ ಗೆಳೆತನ ಇನ್ನು ಅಚ್ಚು ಮೆಚ್ಚು. ಇದಕ್ಕೆ ಸ್ಯಾಂಡಲ್ವುಡ್ ನ ಖ್ಯಾತ ನಟ “ಧನಂಜಯ್ ಹಾಗೂ ವಸಿಷ್ಠ ಸಿಂಹ” ನಡುವಿನ ಬಾಂಧವ್ಯ ಸಾಕ್ಷಿ.
ಧನಂಜಯ್ ಹಾಗೂ ವಸಿಷ್ಠ ಸಿಂಹ ಇಬ್ಬರು ಸಹ ಸ್ಯಾಂಡಲ್ವುಡ್ ಸಿನಿ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಹಾಗೂ ಉತ್ತಮ ನಟನೆಯಿಂದ ಎಷ್ಟೋ ಯುವಕರ ಮನ ಗೆದ್ದಿದ್ದಾರೆ. ಇವರಿಬ್ಬರ ಈ ಬಾಂಧವ್ಯ ಇಂದಿನಾದ್ದಲ್ಲ. ಇಬ್ಬರು ಸಹ ಉತ್ತಮ ನಟರೆ ಆದರೂ ಸಹ ಖ್ಯಾತ ಶಿವವನ್ನ ಅವರು ನಟಿಸಿರುವ “ಟಗರು” ಚಿತ್ರದಲ್ಲಿ ಇವರಿಬ್ಬರು ಕಲನಾಯಕರ ಪಾತ್ರವನ್ನು ಅಚ್ಚುಕಟ್ಟಾಗಿ ವಹಿಸಿಕೊಂಡಿದ್ದರು. ಈ ಸಿನಿಮಾದ ಪಾತ್ರಗಳ ಮೂಲಕ ಡಾಲಿ ಧನಂಜಯ್ ಹಾಗೂ ಚಿಟ್ಟೆ ವಸಿಷ್ಠ ಎನ್ನುವ ಹೆಸರು ಪಡೆದರು.
ಈ ಬಾಂಧವ್ಯಕ್ಕೆ ಇದೀಗ ಮತ್ತೊಂದು ಹೊಸ ಸಾಧನದ ಹೆಜ್ಜೆ ಮುಂದಾಗಿದೆ. ಹೌದು, ವಶಿಷ್ಟ ಸಿಂಹ ಅವರು ತಮ್ಮದೇ ಆದ ಹೊಸ ಸ್ವಂತ ‘ಆಡಿಯೋ ಕಂಪನಿ’ ಶುರು ಮಾಡಿದ್ದಾರೆ. ಈ ಕಂಪನಿಯ ‘ಲೋಗೋ ಲಾಂಚ್’ ಮಾಡಲಾಗಿತ್ತು. ತನ್ನ ನೆಚ್ಚಿನ ಗೆಳೆಯನ ಈ ಹೊಸ ಮುನ್ನಿಡಿ ಹೆಜ್ಜೆಗೆ ಶುಭ ಹಾರೈಸಲು ಧನಂಜಯ್ ಬಂದಿದ್ದರು.
ವಿಶೇಷವೆಂದರೆ, ಕಾರ್ಯಕ್ರಮಕ್ಕೆ “ನಾದ ಬ್ರಹ್ಮ ಹಂಸಲೇಖ” ಅವರನ್ನು ಮುಖ್ಯ ಅತಿಥಿಯಾಗಿ ಆಗಮಿಸಲಾಗಿತ್ತು. ಈ ವೇಳೆ ಬಟ ಧನಂಜಯ ಅವರು ಹಂಸಲೇಖ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆದಿದ್ದರು. “ನಾನು ಕೂಡ ನಿಮ್ಮ ಶಿಷ್ಯ. ನಿಮ್ಮ ಹಾಡುಗಳನ್ನು ಕೇಳಿ, ಅದರಲ್ಲಿನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮನುಷ್ಯರಾಗುವ ಸಾಧ್ಯತೆ ಇದೆ. ಆ ರೀತಿ ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು” ಎಂದು ಹಂಸಲೇಖ ಅವರ ಮೇಲಿನ ಗೌರವ ಮಾತುಗಳನ್ನು ಹಂಚಿಕೊಂಡರು .