ಖ್ಯಾತ ನಟ ಡಾಲಿ ಧನಂಜಯ್ ಅವರು ನಾಡಬ್ರಹ್ಮ ಹಂಸಲೇಖ ಅವರ ಶಿಷ್ಯ ಅಂತೆ!!.

ಕೆಲವರ ಗೇಳೆತನ ಹಾಗೂ ಬಾಂಧವ್ಯ ಸಣ್ಣ ಕಾರಣಾಂತರಗಳಿಂದ ಶುರು ಆಗಿ ಎಲ್ಲಿಗೂ ಕರೆದೊಯ್ಯುತ್ತದೆ ಅಲ್ಲದೆ ಅವರ ನಡುವಿನ ಮಮತೆ ಬಾಂಧವ್ಯ ಹಲವಾರು ಸ್ಪೂರ್ತಿಯಾಗಿರುತ್ತದೆ ಹಾಗೂ ಎಲ್ಲರನ್ನು ಮೋಡಿಮಾಡುತ್ತದೆ. ಅದರಲ್ಲೂ ಜನ ಮೆಚ್ಚಿದ್ದ ನಟರ ಗೆಳೆತನ ಇನ್ನು ಅಚ್ಚು ಮೆಚ್ಚು. ಇದಕ್ಕೆ ಸ್ಯಾಂಡಲ್ವುಡ್ ನ ಖ್ಯಾತ ನಟ “ಧನಂಜಯ್ ಹಾಗೂ ವಸಿಷ್ಠ ಸಿಂಹ” ನಡುವಿನ ಬಾಂಧವ್ಯ ಸಾಕ್ಷಿ.

ಧನಂಜಯ್ ಹಾಗೂ ವಸಿಷ್ಠ ಸಿಂಹ ಇಬ್ಬರು ಸಹ ಸ್ಯಾಂಡಲ್ವುಡ್ ಸಿನಿ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಹಾಗೂ ಉತ್ತಮ ನಟನೆಯಿಂದ ಎಷ್ಟೋ ಯುವಕರ ಮನ ಗೆದ್ದಿದ್ದಾರೆ. ಇವರಿಬ್ಬರ ಈ ಬಾಂಧವ್ಯ ಇಂದಿನಾದ್ದಲ್ಲ. ಇಬ್ಬರು ಸಹ ಉತ್ತಮ ನಟರೆ ಆದರೂ ಸಹ ಖ್ಯಾತ ಶಿವವನ್ನ ಅವರು ನಟಿಸಿರುವ “ಟಗರು” ಚಿತ್ರದಲ್ಲಿ ಇವರಿಬ್ಬರು ಕಲನಾಯಕರ ಪಾತ್ರವನ್ನು ಅಚ್ಚುಕಟ್ಟಾಗಿ ವಹಿಸಿಕೊಂಡಿದ್ದರು. ಈ ಸಿನಿಮಾದ ಪಾತ್ರಗಳ ಮೂಲಕ ಡಾಲಿ ಧನಂಜಯ್ ಹಾಗೂ ಚಿಟ್ಟೆ ವಸಿಷ್ಠ ಎನ್ನುವ ಹೆಸರು ಪಡೆದರು.

ಈ ಬಾಂಧವ್ಯಕ್ಕೆ ಇದೀಗ ಮತ್ತೊಂದು ಹೊಸ ಸಾಧನದ ಹೆಜ್ಜೆ ಮುಂದಾಗಿದೆ. ಹೌದು, ವಶಿಷ್ಟ ಸಿಂಹ ಅವರು ತಮ್ಮದೇ ಆದ ಹೊಸ ಸ್ವಂತ ‘ಆಡಿಯೋ ಕಂಪನಿ’ ಶುರು ಮಾಡಿದ್ದಾರೆ. ಈ ಕಂಪನಿಯ ‘ಲೋಗೋ ಲಾಂಚ್​’ ಮಾಡಲಾಗಿತ್ತು. ತನ್ನ ನೆಚ್ಚಿನ ಗೆಳೆಯನ ಈ ಹೊಸ ಮುನ್ನಿಡಿ ಹೆಜ್ಜೆಗೆ ಶುಭ ಹಾರೈಸಲು ಧನಂಜಯ್ ಬಂದಿದ್ದರು.

ವಿಶೇಷವೆಂದರೆ, ಕಾರ್ಯಕ್ರಮಕ್ಕೆ “ನಾದ ಬ್ರಹ್ಮ ಹಂಸಲೇಖ” ಅವರನ್ನು ಮುಖ್ಯ ಅತಿಥಿಯಾಗಿ ಆಗಮಿಸಲಾಗಿತ್ತು. ಈ ವೇಳೆ ಬಟ ಧನಂಜಯ ಅವರು ಹಂಸಲೇಖ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆದಿದ್ದರು. “ನಾನು ಕೂಡ ನಿಮ್ಮ ಶಿಷ್ಯ. ನಿಮ್ಮ ಹಾಡುಗಳನ್ನು ಕೇಳಿ, ಅದರಲ್ಲಿನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮನುಷ್ಯರಾಗುವ ಸಾಧ್ಯತೆ ಇದೆ. ಆ ರೀತಿ ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು” ಎಂದು ಹಂಸಲೇಖ ಅವರ ಮೇಲಿನ ಗೌರವ ಮಾತುಗಳನ್ನು ಹಂಚಿಕೊಂಡರು .